
ಧಾರವಾಡ: ಶಾಸಕಾಂಗ ಮತ್ತು ಕಾರ್ಯಾಂಗ ಕ್ಷೇತ್ರದಲ್ಲಿ ಅಲ್ಲದೆ ಸನಾತನ ಧರ್ಮೀಯರ ಹಾವಳಿ ನ್ಯಾಯಾಂಗದಲ್ಲೂ ಪ್ರಾರಂಭ ಆಗಿದೆ ಸನಾತನ ಧರ್ಮಿಯರಿಗೆ ಬಿ.ಆರ್ ಗವಾಯಿಯವರು ದಲಿತರು ಎಂಬ ಕಾರಣಕ್ಕೆ ಗುರಿ ಮಾಡಿದ್ದಾರೆ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ನಡೆದ ನಮ್ಮದೇಶದ ಶ್ರೇಷ್ಠ ಸಂವಿಧಾನದ ಮೇಲೆ ದಾಳಿ ಮಾಡಿದಂತೆ ಕಾಣುತ್ತಿದೆ ಎಂದು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಮಾದ್ಯಮ ವಕ್ತಾರ ಬಸವರಾಜ ಮಾದರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಪ್ರೀಂ ಕೋರ್ಟ್ ನ ಒಬ್ಬ ಮುಖ್ಯನ್ಯಾಯಮೂರ್ತಿಗಳಿಗೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿರುವ ಘಟನೆಯನ್ನು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗ ತೀವ್ರವಾಗಿ ಖಂಡಿಸುತ್ತದೆ. ಮುಖ್ಯನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯಕ್ಕೆ ಅವಮಾನ ಮಾಡಿರುವ ಕಿಡಿಗೇಡಿ ವಕೀಲನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಿದ್ದಾರೆ.
ಆರ್ ಎಸ್ ಎಸ್ ಮತ್ತು ಸನಾತನ ಧರ್ಮೀಯರು ಉದ್ದೇಶಪೂರ್ವಕವಾಗಿಯೇ ಉನ್ನತ ಸ್ಥಾನದಲ್ಲಿರುವ ದಲಿತರನ್ನು ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಕಾರ್ಯನಿರ್ವಹಿಸುವ ಶೋಷಣೆ ಮತ್ತು ದೌರ್ಜನ್ಯ ಮಾಡುವುದೇ ಸನಾತನ ಧರ್ಮೀಯರ ಉದ್ದೇಶವಾಗಿದೆ.
ಆದ್ದರಿಂದ ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಎಸ್.ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದವರು. ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಕೆಟ್ಟ ಬುದ್ಧಿ ಭಧ್ರವಾಗಿ ಇನ್ನೂ ಉಳಿದುಕೊಂಡಿದೆ ಎನ್ನುವುದಕ್ಕೆ ಇಂದಿನ ಘಟನೆ ಸಾಕ್ಷಿಯಾಗಿದೆ.
ಆರ್ ಎಸ್ ಎಸ್ ಸಂಘಟನೆ ಮುಖಂಡರುಗಳು ನೂರು ವರ್ಷ ವಾರ್ಷಿಕೋತ್ಸವ ಸಂಭ್ರಮಕ್ಕೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಬಿ. ಆರ್ ಗವಾಯಿ ಅವರ ತಾಯಿಯನ್ನು ಆಹ್ವಾನಿಸಿದರು. ಆರ್ ಎಸ್ ಎಸ್ ಸಂಘಟನೆಯ ಆಹ್ವಾನವನ್ನು ಬಿ.ಆರ್ ಗವಾಯಿ ಅವರು ತಾಯಿವರು ತಿರಸ್ಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಆರ್ ಎಸ್ ಎಸ್ ಸಂಘಟನೆ ಮುಖಂಡರುಗಳು ಯಾಕಂದ್ರೆ ಸಂವಿಧಾನದ ಮೇಲೆ ಅವರ ತಾಯಿ ಅಪಾರವಾದ ಗೌರವವನ್ನು ಮತ್ತು ಬುದ್ಧನ ಅನುಯಾಯಿಗಳಾಗಿದ್ದರು.
ಈ ದ್ವೇಷವನ್ನು ಈ ರೀತಿಯಾಗಿ ಸನಾತನ ಧರ್ಮಿಯರು ನಮ್ಮ ದೇಶದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯುವ ಮೂಲಕ ಉನ್ನತ ಸ್ಥಾನದಲ್ಲಿರುವ ಇವರನ್ನು ಅವಮಾನಿಸಿದ್ದಾರೆ.
ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಎಸ್.ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕೆ ಇವೆ ಎನ್ನುವುದನ್ನು ಅವರ ಗಮನಕ್ಕೆ ತರಬಯಸುತ್ತೇವೆ. ಮಾನ್ಯ ಮುಖ್ಯನ್ಯಾಯಮೂರ್ತಿಗಳು ಯಾವುದೇ ಪಕ್ಷ ಹಾಗೂ ಒಂದು ಧರ್ಮಕ್ಕೆ ಸೇರಿದವರಲ್ಲ. ಈ ದೃಷ್ಟಿಯಿಂದ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಸುಪ್ರೀಂ ಕೋರ್ಟ್ನಲ್ಲಿ ಇಂದು ನಡೆದಿರುವ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಬೇಕೆಂದು ಮನವಿ ಮಾಡುತ್ತೇನೆ.
ಆರ್ ಎಸ್ ಎಸ್ ಸಂಘಟನೆ ಮತ್ತು ಸನಾತನ ಧರ್ಮೀಯರು ಸ್ವತಂತ್ರ ಪೂರ್ವದಿಂದಲೂ ಇಂದಿನವರೆಗೂ ದಲಿತರನ್ನು ಎಲ್ಲಾ ರಂಗದಲ್ಲೂ ಎಲ್ಲಾ ಕ್ಷೇತ್ರದಲ್ಲೂ ಶೋಷಣೆ ಮತ್ತು ದೌರ್ಜನ್ಯ, ಸಾಮಾಜಿಕವಾಗಿ ಬಹಿಷ್ಕಾರ ಹಾಕುತ್ತಾ ದಲಿತರನ್ನು ಕಡೆಗಣಿಸುತ್ತಾ ಬಂದಿದ್ದಾರೆ.
ಈಗಲೂ ಸಹ ಪ್ರಜ್ಞಾವಂತರಾಗುತ್ತಿರುವ ಸಮಾಜದಲ್ಲಿ ಸಾಕಷ್ಟು ರೀತಿಯಲ್ಲಿ ನಮ್ಮ ಸಂವಿಧಾನದ ಅಡಿಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬದಲಾವಣೆಗಳಾಗುತ್ತಿದ್ದರು ಒಂದಲ್ಲ ಒಂದು ರೀತಿಯಲ್ಲಿ ದಲಿತರನ್ನು ಅತ್ಯಂತ ಹೀನಾಯ ಸ್ಥಿತಿಯ ರೀತಿಯಲ್ಲಿ ಮನೋಭಾವನೆಗಳನ್ನು ವ್ಯಕ್ತಪಡಿಸುತ್ತಾ ಸನಾತನ ಧರ್ಮೀಯ ಆಚಾರ ವಿಚಾರಗಳಿಂದ ಶೋಷಣೆ ಮಾಡುತ್ತಲೇ ಬಂದಿದ್ದಾರೆ. ಇಂತಹ ಸನಾತನ ಧರ್ಮೀಯ ಕಟ್ಟುಪಾಡುಗಳಿಗೆ ಒಳಗಾಗದಂತೆ ಶೋಷಣೆ, ದೌರ್ಜನ್ಯಗಳಿಗೆ ಎದುರಿಸಿ ಮೆಟ್ಟಿ ನಿಲ್ಲುವಂತೆ ದಲಿತರು ಪ್ರಜ್ಞಾವಂತರಾಗಬೇಕು ಮತ್ತು ಬಲಾಡ್ಯವಾಗಬೇಕಾಗಿದೆ.
ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದುಹಾಕಿ, ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕಿರುವ ಕಾರಣಕ್ಕಾಗಿಯೇ ವಕೀಲರಾದ ರಾಕೇಶ್ ಕಿಶೋರ್ ನಂತಹ ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎನ್ನುವುದನ್ನು ನಾವು ಮರೆಯಬಾರದು. ನಾಥೂರಾಮ್ ಗೋಡ್ಸೆಯಂತಹ ಒಬ್ಬ ಕೊಲೆಗಡುಕನನ್ನು ದೇಶಪ್ರೇಮಿ ಎಂದು ಮೆರೆಸಲು ಹೊರಟಿರುವ ರೀತಿಯಲ್ಲಿಯೇ ಕೆಲವು ಪುಂಡರು ವಕೀಲನ ಕುಕೃತ್ಯವನ್ನು ಸಂಭ್ರಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಮತ್ತು ಇಂಥ ನಿಕೃಷ್ಟ ಮನೋಭಾವನೆಯನ್ನು ಹೊಂದಿರುವ ಇವರನ್ನು ಬಾರ್ ಕೌನ್ಸಿಲಿಂಗ್ ಅಸೋಸಿಯೇಷನ್ನಿಂದ ವಕೀಲ ವೃತ್ತಿಯನ್ನು ರದ್ದುಪಡಿಸಬೇಕು. ಕೋಮುವಾದಿಯನ್ನು ಹೊಂದಿರುವ ಸನಾತನ ಧರ್ಮೀಯ ನಮ್ಮ ಸಂವಿಧಾನದ ಅಡಿಯ ಕಾನೂನಿನ ಮೂಲಕ ಬುದ್ದಿ ಕಳಿಸಬೇಕಾಗಿದೆ ಎಂದು ಬಸವರಾಜ ಮಾದರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




