ಜಿಲ್ಲೆ

SJRVP ಚುನಾವಣೆ- ಭವರಲಾಲ್ ಜೈನ್ ತಂಡಕ್ಕೆ ಜಯ

ಹುಬ್ಬಳ್ಳಿ: 63 ವರ್ಷದ ಹಳೆಯ ಏಕೈಕ ಜೈನ ಶಿಕ್ಷಣ ಸಂಸ್ಥೆಯಾದ SJRVP ಚುನಾವಣೆಯಲ್ಲಿ ಭವರಲಾಲ ಸಿ.ಜೈನ ಅವರ ತಂಡವು
ಪ್ರಚಂಡ ಬಹುಮತದಿಂದ
ವಿಜೇತರಾಗಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಸಮಾಜದ ಹಿರಿಯರು ಮತ್ತು ಗಣ್ಯರು ಸತ್ಕಾರ ಮಾಡಿ ಶುಭ ಹಾರೈಸಿದರು.

ಅಲ್ಲದೇ ಭವರಲಾಲ್ ಜೈನ್ ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಂಸದ ಜಗದೀಶ್ ಶೆಟ್ಟರ್, ಶಾಸಕ
ಮಹೇಶ್ ಟೆಂಗಿನಕಾಯಿ, ವಿ.ಆರ.ಎಲ್ ಮುಖ್ಯಸ್ಥ ಆನಂದ್ ಸಂಕೇಶ್ವರ, ವಸಂತ ಹೊರಟ್ಟಿ ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.

ಇನ್ನು ಹುಬ್ಬಳ್ಳಿಯ ಜೈನ್ ಮರುಧರ ಸಂಘ, ರಾಜಸ್ಥಾನ್ ಮರುಧರ್ ಸಂಘ, ಶಿವಾಂಚಿ ಜೈನ ಸಂಘ, ಕೇಶ್ವಾಪುರ ಜೈನ ಸಂಘ,
ಶ್ರೀವಾಸು ಪೂಜ್ಯ ಜೈನ ಸಂಘ,
ಶ್ರೀ ಕಚ್ಚಿ ಜೈನ್ ಸಮಾಜ, ಜೈನ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ (ಜಿಟೋ) ಹುಬ್ಬಳ್ಳಿ, ರಾಜಪುರೋಹಿತ್ ಸಮಾಜ, ದೇವಾಸಿ ಸಮಾಜ, ಜೈನ್ ಸಮಾಜ ಗದಗ, ಮಹಾವೀರ್ ಎಜುಕೇಶನ್ ಸೊಸೈಟಿ ಗದಗ, ಶ್ರೀ ಜೈನ್ ಪಾರ್ಶ್ವನಾಥ್ ದಾದಾವಾಡಿ ಗದಗ, ಜೈನ ಸಮಾಜ ಧಾರವಾಡ, ಜೆ ಸಿ ಎಲ್ ಸ್ಪೋರ್ಟ್ಸ್ ಕ್ಲಬ್ ಹುಬ್ಬಳ್ಳಿ, ಜೈನ ಸಮಾಜ ಹೊಸಪೇಟ ಸಂಘಟನೆಗಳು ಸತ್ಕರಿಸಿದ್ದಾರೆ.

ವೈಯಕ್ತಿಕವಾಗಿ ಉಪ ಮೇಯರ್ ಸಂತೋಷ್ ಚವಾನ್, ಗೌರಿಶಂಕರ್ ಮೋಟ್ ವಕೀಲರು ಹೈಕೋರ್ಟ್, ಶಿವು ಮೆಣಸಿನಕಾಯಿ ಕಾರ್ಪೊರೇಟರ್, ಪ್ರವೀಣ್ ಹುರಳಿ ಮಾಜಿ ಕಾರ್ಪೊರೇಟರ್, ಅಶೋಕ್ ವಾಲ್ಮೀಕಿ, ತೋಟಪ್ಪ ನಿದ್ಗುಂಡಿ, ಆದಪ್ಪಗೌಡರ ನೂತನ ಅಧ್ಯಕ್ಷರು ಚೇಂಬರ್ ಆಫ್ ಕಾಮರ್ಸ್, ಡಾ ಕ್ರಾಂತಿ ಕಿರಣ್, ಸದಾನಂದ ಡಂಗನವರ ಕಾಂಗ್ರೆಸ್ ಮುಖಂಡರು, ಚಂದ್ರಶೇಖರ್ ಗೋಕಾಕ್, ಸಾಂಬಾಜಿ ಕಲಾಲ,
ಮತ್ತು ಗುರು ಹಿರಿಯರು ಪ್ರೀತಿಯಿಂದ ಸನ್ಮಾನಿಸಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button