ಜಿಲ್ಲೆ

ಧಾರವಾಡದಲ್ಲಿ ಮಾಜಿ ಸೈನಿಕನ ಮೇಲೆ ಪೊಲೀಸ್ ಹಲ್ಲೆ – ಕಿಮ್ಸ್ ಆಸ್ಪತ್ರೆಗೆ ಪ್ರಮೋದ ಮುತ್ತಾಲಿಕ್ ಭೇಟಿ

ಧಾರವಾಡ: ಧಾರವಾಡದಲ್ಲಿ ನಡೆದ ಘಟನೆಯಲ್ಲಿ ಪೊಲೀಸರು ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಮಾಜಿ ಸೈನಿಕ ಪ್ರಸ್ತುತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀ ಮುತಾಲಿಕರು ವಿಶೇಷವಾಗಿ ರಾಮಪ್ಪ ನಿಪ್ಪಾಣಿ ಬಗ್ಗೆ ಉಲ್ಲೇಖಿಸಿ ಹೇಳಿದ್ದು, “ರಾಮಪ್ಪ ನಿಪ್ಪಾಣಿ ಅವರು ಧಾರವಾಡದಲ್ಲಿ ‘ಸೈನಿಕ ಖಾನಾವಳಿ’ ನಡೆಸಿ, ಯಾವುದೇ ರಾಸಾಯನಿಕ ಪದಾರ್ಥಗಳಿಲ್ಲದೆ ಶುದ್ಧ ಆಹಾರವನ್ನು ನೀಡುತ್ತಿದ್ದಾರೆ. ಜನರಿಗೆ 38 ರೂಪಾಯಿ ಮಾತ್ರ ಮೊತ್ತದಲ್ಲಿ ಹೊಟ್ಟೆ ತುಂಬುವ ಅನ್ನ ನೀಡುವಂತಹ ಸೇವೆಯನ್ನು ಅವರು ನಡಿಸುತ್ತಿದ್ದಾರೆ. ಇಂತಹ ಸೇವೆದಾತರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿದ್ದು ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ,” ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಇಂದು ಸಂಜೆ 6.30ಕ್ಕೆ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ ಜಿ ಮುತ್ತಾಲಿಕ್ ಅವರು ಕಿಮ್ಸ್ ಆಸ್ಪತ್ರೆಗೆ ಆಗಮಿಸಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸೈನಿಕನನ್ನು ಭೇಟಿಯಾಗಿ ಧೈರ್ಯ ತುಂಬಿದ ಮುತ್ತಾಲಿಕ್, ಈ ಹಲ್ಲೆ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ಅವರು ಮಾತನಾಡಿದ ಸಂದರ್ಭದಲ್ಲಿ, “ಮಾಜಿ ಸೈನಿಕರು ದೇಶದ ಗಡಿಯನ್ನು ಕಾಪಾಡಿದ ವೀರರು. ಅವರ ಮೇಲೆ ಹಲ್ಲೆ ನಡೆಸುವುದು ನಾಚಿಕೆಗೆಡು ಕಾರ್ಯ. ಇಂತಹ ಕೃತ್ಯಗಳನ್ನು ಯಾವುದೇ ರೀತಿಯಿಂದಲೂ ಸಹಿಸಲಾಗುವುದಿಲ್ಲ,” ಎಂದು ಗಂಭೀರವಾಗಿ ಪ್ರತಿಕ್ರಿಯಿಸಿದರು.

ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಿರುದ್ಧ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟು ತೀವ್ರ ಚರ್ಚೆಗಳು, ಪ್ರತಿಕ್ರಿಯೆಗಳು ವ್ಯಕ್ತವಾಗುವ ಸಾಧ್ಯತೆ ಇದೆ.

ವರದಿ ಶಶಿಕಾಂತ್ ಕೊರವರ್

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button