Top Newsಅಪರಾಧಜಿಲ್ಲೆ

ಹುಬ್ಬಳ್ಳಿಯಲ್ಲಿ ಯುವಕನ ಬರ್ಬರ್ ಹತ್ಯೆ…

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊರ್ವನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಲಿಂಗರಾಜನಗರ ರಸ್ತೆಯಲ್ಲಿನ ಗೋಲ್ಡನ್‌ ಹೈಟ್ಸ್ ಬಾರ್’ನ ಪಾರ್ಕಿಂಗ್ ಸ್ಥಳದಲ್ಲಿ ನಡೆದಿದೆ.

ಆಕಾಶ ವಾಲ್ಮೀಕಿ (24) ಹತ್ಯೆಯಾಗಿರುವ ಯುವಕ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಮೂವರು ಸೇರಿಕೊಂಡು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ನಂದಗಾವಿ, ವಿದ್ಯಾನಗರದ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ, ಕೊಲೆಗಾರರ ಬಂಧನಕ್ಕೆ ಕ್ರಮ ಕೈಗೊಂಡಿದ್ದರು.

ಅದರಂತೆ ಆರೋಪಿಗಳ ಬೆನ್ನು ಬಿದ್ದ ಪೊಲೀಸರ ಮೇಲೆಯೇ MTS ಕಾಲೋನಿ ಬಳಿಯಲ್ಲಿ ಹಲ್ಲೆಗೆ ಮುಂದಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರು ಆರೋಪಿಗಳ ಕಾಲಿಗೆ ಗುಂಡೆಟ್ಟು ನೀಡಿ ಬಂಧಿಸಲಾಗಿದೆ.

ಯಲ್ಲಪ್ಪ, ಆರೋಪಿ
ವಿನೋದ, ಆರೋಪಿ
ಅಭಿಷೇಕ, ಆರೋಪಿ

 

ಇನ್ನೂ ಗುಂಡೆಟ್ಟು ತಿಂದವರನ್ನು ಆನಂದನಗರದ ನಿವಾಸಿ ಅಭಿಷೇಕ ಶಿರೂರ, ವಿನೋದ್ ಅಂಬಿಗೇರ, ಯಲ್ಲಪ್ಪ ಕೋಟಿ ಎಂದು ತಿಳಿದುಬಂದಿದೆ. ‌ಇವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೇಲ್ನೋಟಕ್ಕೆ ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದ್ದರು ಇನ್ನಷ್ಟೇ ಪೊಲೀಸರ ತನಿಖೆಯಿಂದ ನಿಖರ ಮಾಹಿತಿ ತಿಳಿದುಬರಬೇಕಿದೆ.

ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರು

ಶ್ರೀಮಂತ ಹುಣಸಿಕಟ್ಟಿ, ಪಿಎಸ್ಐ, ವಿದ್ಯಾನಗರ ಪೊಲೀಸ್ ಠಾಣೆ
ಸುನಿಲ್ ಎಮ್, ಪಿಎಸ್ಐ, ಕಮರಿಪೇಟೆ ಪೊಲೀಸ್ ಠಾಣೆ
ಶರಣಗೌಡ ಮುಲಿಮನಿ, ಸಿಪಿಸಿ, ವಿದ್ಯಾನಗರ ಪೊಲೀಸ್ ಠಾಣೆ
ಮುತ್ತಪ್ಪ ಲಮಾಣಿ, ಸಿಹೆಚ್ ಸಿ, ವಿದ್ಯಾನಗರ ಪೊಲೀಸ್ ಠಾಣೆ
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
1
+1
0
+1
0

Related Articles

Leave a Reply

Your email address will not be published. Required fields are marked *

Back to top button